ಲಕ್ಷಿತ್ಆರ್ಟ್ಸ್ಲಾಂಛನದಲ್ಲಿಪರಮೇಶ್ವರಯ್ಯನಿರ್ಮಿಸುತ್ತಿರುವ, ಮುನಿರಾಜುಕಾರ್ಯಕಾರಿ ನಿರ್ಮಾಣದ, ಕೆ.ದೇವ್ ನಿರ್ದೇಶನದ ‘ಧನು’ ಚಿತ್ರ ಕಳೆದ ತಿಂಗಳಷ್ಟೇ ಆರಂಭವಾಗಿತ್ತು.ಆದರೆಕಡಿಮೆ ಅವಿಧಿಯಲ್ಲಿ, ಒಂದೇ ಷೆಡ್ಯೂಲಿನಲ್ಲಿ ಶೇ.೮೦%ರಷ್ಟು ಚಿತ್ರೀಕರಣವನ್ನು ಮುಗಿಸಿಬಿಟ್ಟಿದ್ದಾರೆ.ಈ ಹೊತ್ತಿಗಾಗಲೇ ಹಾಡುಗಳ ಚಿತ್ರೀಕರಣವೂ ಮುಗಿದುಬಿಡಬೇಕಿತ್ತು.ಆದರೆ ಕೆಲ ದಿನಗಳ ಹಿಂದೆ ಸುಂಕದಕಟ್ಟೆ ‘ಡಿ’ ಗ್ರೂಪ್ ಲೇಔಟ್ ನಲ್ಲಿ ಸಾಹಸ ದೃಶ್ಯದಚಿತ್ರೀಕರಣ ನಡೆಸುತ್ತಿದ್ದರು. ನಾಯಕನಟ ಸಂತೋಷ್ಎದುರಿಗಿದ್ದವನ ಬುರುಡೆಗೆಡಿಚ್ಚಿ ಹೊಡೆಯಬೇಕಿತ್ತು. ನಿರ್ದೇಶಕಆಕ್ಷನ್ ಹೇಳುತ್ತಿದ್ದಂತೇ ಒಬ್ಬರಿಗೊಬ್ಬರುಡಿಚ್ಚಿ ಹೊಡೆದುಕೊಂಡರು. ಆದರೆ ಸ್ಟಂಟ್ ಸ್ವಲ್ಪ ಮಿಸ್ಆಗಿದ್ದೇ, ಹೀರೋಅಣೆಗೆಢಮಾರ್ಅಂತಾಏಟುಬಿತ್ತು. ಹಣೆಯ ಮೇಲಿನ ಉಬ್ಬು ಬಿಚ್ಚಿಕೊಂಡುರಕ್ತ ಸುರಿಯಲು ಆರಂಭಿಸಿತ್ತು. ಡಿಚ್ಚಿ ಪೆಟ್ಟಿನಿಂದ ಹೀರೋ ಸಂತೋಷ್ ಸುಧಾರಿಸಿಕೊಳ್ಳುವುದು ತಡವಾಗಿದ್ದರಿಂದ ಹಾಡುಗಳ ಚಿತ್ರೀಕರಣಕೂಡಾ ವಿಳಂಬವಾಯಿತು. ಈಗ ಎಲ್ಲರೆಡಿಯಾಗಿ ಚಿಕ್ಕಮಗಳೂರಿಗೆ ‘ಧನು’ ಚಿತ್ರತಂಡ ಹಾಡುಗಳ ಚಿತ್ರೀಕರಣಕ್ಕೆ ಹೊರಟುನಿಂತಿದೆ.ಕವಿರಾಜ್ ಬರೆದಿರುವ ‘ಒಂದು ಸಾರಿತಿರುಗಿ ನೋಡು’ ಹಾಗೂ ಮಾದೇವ್ (ತೇಜ) ರಚಿಸಿರುವ ‘ಕಬ್ಬಿನಜಲ್ಲೆಇದೆರುಚಿಯಾ ನೋಡು....’ ಎಂಬ ಎರಡು ಹಾಡುಗಳು ಚಿಕ್ಕಮಗಳೂರಿನ ಫ್ರೆಶ್ ಲೊಕೇಷನ್ನುಗಳಲ್ಲಿ ಚಿತ್ರೀಕರಣಗೊಳ್ಳಲಿದೆ.
ಈಚಿತ್ರದ ಮತ್ತೊಂದು ವಿಶೇಷತೆಯೆಂದರೆ, ಖ್ಯಾತ ಸಾಹಿತಿಡಾ.ದೊಡ್ಡರಂಗೇಗೌಡ್ರುಒಂದು ಹಾಡಿನಲ್ಲಿ ನಟಿಸಿದ್ದಾರೆ. ‘ಇದೆಂಥ ಪುಣ್ಯ ಭೂಮಿಯಿದು ಭಾರತ’ ಎನ್ನುವದೇಶಭಕ್ತಿಗೀತೆಯಲ್ಲಿಡಾ.ದೊಡ್ಡರಂಗೇಗೌಡ್ರು ಮನೋಜ್ಞವಾಗಿ ನಟಿಸಿದ್ದಾರೆ.
ಬೆಂಗಳೂರಿನ ಸುಂಕದಕಟ್ಟೆಯ ಸಿಂಡಿಕೇಟ್ ಲೇಔಟ್, ಇಸ್ಕಾನ್ಟೆಂಪಲ್ ಬಳಿಯಿರುವ ಸ್ಲಂ, ತಾವರೆಕೆರೆರಸ್ತೆ ಮುಂತಾದ ಸ್ಥಳಗಳಲ್ಲಿ ಈ ಚಿತ್ರದ ಮಾತಿನ ಭಾಗದ ಮತ್ತು ಸಾಹಸದೃಶ್ಯಗಳ ಚಿತ್ರೀಕರಣ ನಡೆದಿದೆ.
ಸಂತೋಷ್, ಖುಷಿ ನಾಯಕ, ನಾಯಕಿಯಾಗಿ ನಟಿಸಿರುವ ಈ ಧನುಚಿತ್ರಕ್ಕೆರಮೇಶ್ಕೊಯಿರಾಕ್ಯಾಮೆರಾ, ಬಿ.ಆರ್. ಹೇಮಂತ್ಕುಮಾರ್ ಸಂಗೀತ, ಸಂಜೀವ್ರೆಡ್ಡಿ ಸಂಕಲನ, ಕೌರವ ವೆಂಕಟೇಶ್, ಸುಪ್ರೀಂ ಸುಬ್ಬು ಸಾಹಸ ಮತ್ತುಕೆ.ದೇವ್ಅವರ ನಿರ್ದೇಶನವಿದೆ. ನಾಯಕಿ ಖುಷಿ ಈಗಾಗಲೇ ‘ಎಂಗೇಜ್ ಮೆಂಟ್’ ಎನ್ನುವಚಿತ್ರದಲ್ಲಿ ನಟಿಸಿದ್ದಾಳೆ.ಆದರೆ ಆ ಚಿತ್ರವಿನ್ನುತೆರೆಗೆ ಬಂದಿಲ್ಲ. ಅಭಿರಾಮ್ಅನಾಥನಲ್ಲ, ಇಷ್ಟ, ಬೆಂಗಳೂರು ಮೆಟ್ರೋ, ಹೂವಿ ಚಿತ್ರಗಳಲ್ಲಿ ನಟಿಸಿರುವ ನಾಯಕನಟ ಸಂತೋಷ್ಗೆಇದುಐದನೇಅನುಭವ!